‘ತನ್ನ ಬಳಿ 3 ಕೆ.ಜಿ ತೂಕದ ಚಿನ್ನದ ಬಿಸ್ಕತ್ ಇರುವುದಾಗಿ ಹೇಳಿದ್ದ ಪ್ರಮುಖ ಆರೋಪಿ, ಇಲ್ಯಾಸ್ನನ್ನು ಸಂಪರ್ಕಿಸಿದ್ದ. ಬಿಸ್ಕತ್ ಮಾರಾಟ ಮಾಡಿಸಿಕೊಟ್ಟರೆ ಉತ್ತಮ ಕಮಿಷನ್ ನೀಡುವುದಾಗಿ ತಿಳಿಸಿದ್ದ. ಪ್ರಮುಖ ಆರೋಪಿಯನ್ನು ಬೆಂಗಳೂರಿಗೆ ಕರೆಸಿದ್ದ ಇಲ್ಯಾಸ್, ನಗರ್ತಪೇಟೆಯ ಚಿನ್ನದ ವ್ಯಾಪಾರಿ ರಾಹುಲ್ ಕುಮಾರ್ ಎಂಬುವರ ಪರಿಚಯ ಮಾಡಿಸಿದ್ದ.’