×
ADVERTISEMENT
ಈ ಕ್ಷಣ :
ADVERTISEMENT

live- KL Rahul: 'ಕೆ.ಎಲ್ ರಾಹುಲ್‌ರನ್ನು ಕೈ ಬಿಟ್ಟಿರುವುದು ಒಳ್ಳೆಯದು'- ಬ್ರಾಡ್‌ ಹಾಗ್‌ ಅಚ್ಚರಿ ಹೇಳಿಕೆ!

ಭಾರತ ತಂಡದಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗುವ ಎಲ್ಲಾ ಆಟಗಾರರನ್ನು ಕೈ ಬಿಡಲು ಸಾಧ್ಯವಿಲ್ಲ. ಹಾಗಾಗಿ ಅನುಭವಿಗಳ ಜೊತೆ ಯುವ ಆಟಗಾರರು ಕೂಡ ತಂಡದಲ್ಲಿ ಆಡಬೇಕು. ಆ ಮೂಲಕ ಸರಿಯಾದ ಸಂಯೋಜನೆಯನ್ನು ಉಳಿಸಿಕೊಳ್ಳಬೇಕೆಂದು ಆಸೀಸ್‌ ಸ್ಪಿನ್‌ ದಿಗ್ಗಜ ಸಲಹೆ ನೀಡಿದ್ದಾರೆ. ಒಂದು ವೇಳೆ ಭವಿಷ್ಯದಲ್ಲಿ ಚೇತೇಶ್ವರ್‌ ಪೂಜಾರ ವೈಫಲ್ಯ ಅನುಭವಿಸಿದರೆ, ಅವರ ಸ್ಥಾನಕ್ಕೆ ಸೂಕ್ತ ಆಟಗಾರನನ್ನು ಆರಿಸಬೇಕೆಂದು ಇದೇ ವೇಳೆ ಹೇಳಿದ್ದಾರೆ.
Published 10 ಮಾರ್ಚ್ 2023, 6:19 IST
Last Updated 10 ಮಾರ್ಚ್ 2023, 6:23 IST
ಅಕ್ಷರ ಗಾತ್ರ
06:2310 Mar 2023

T3- ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್‌ ಪಂದ್ಯದಿಂದ ಕೆ.ಎಲ್ ರಾಹುಲ್‌ ಅವರನ್ನು ಕೈ ಬಿಡಲಾಗಿತ್ತು.

ಹೊಸದಿಲ್ಲಿ: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಮೂರನೇ ಟೆಸ್ಟ್‌ ಪಂದ್ಯದಿಂದ ಕೆಎಲ್‌ ರಾಹುಲ್ ಅವರನ್ನು ಕೈ ಬಿಟ್ಟು ಶುಭಮನ್‌ ಗಿಲ್‌ಗೆ ಅವಕಾಶ ನೀಡಿರುವುದು ಒಳ್ಳೆಯ ನಿರ್ಧಾರ ಎಂದು ಆಸೀಸ್‌ ಮಾಜಿ ಸ್ಪಿನ್ನರ್‌ ಬ್ರಾಡ್‌ ಹಾಗ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

06:1810 Mar 2023

T2-ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ ನೇರ ಪ್ರಸಾರದಲ್ಲಿ ಮಾತನಾಡಿದ ಅವರು, ಸರಣಿಯ ಸೂಕ್ತ ಸಮಯದಲ್ಲಿ ಶುಭಮನ್ ಗಿಲ್‌ ಅವರಂಥ ಯುವ ಆಟಗಾರನಿಗೆ ಅವಕಾಶ ನೀಡಿರುವುದು ಸರಿಯಾಗಿದೆ ಎಂದು ಹೇಳಿದ್ದಾರೆ. ಆದರೆ, ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಯುವ ಬ್ಯಾಟ್ಸ್‌ಮನ್‌ ವಿಫಲರಾಗಿದ್ದರು.

06:1810 Mar 2023

T1-ಗುರುವಾರದಿಂದ ಅಹಮದಾಬಾದ್‌ನಲ್ಲಿ ಆರಂಭವಾಗುವ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಸೆಣಸಲಿವೆ.

ಹೊಸದಿಲ್ಲಿ: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಮೂರನೇ ಟೆಸ್ಟ್‌ ಪಂದ್ಯದಿಂದ ಕೆಎಲ್‌ ರಾಹುಲ್ ಅವರನ್ನು ಕೈ ಬಿಟ್ಟು ಶುಭಮನ್‌ ಗಿಲ್‌ಗೆ ಅವಕಾಶ ನೀಡಿರುವುದು ಒಳ್ಳೆಯ ನಿರ್ಧಾರ ಎಂದು ಆಸೀಸ್‌ ಮಾಜಿ ಸ್ಪಿನ್ನರ್‌ ಬ್ರಾಡ್‌ ಹಾಗ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.