×
ADVERTISEMENT
ಈ ಕ್ಷಣ :
ADVERTISEMENT

ವಾರ ಭವಿಷ್ಯ 08-10-2023ರಿಂದ 14-08-2023 ರವರೆಗೆ

Published : 6 ಅಕ್ಟೋಬರ್ 2023, 11:05 IST
Last Updated : 6 ಅಕ್ಟೋಬರ್ 2023, 11:05 IST
ಫಾಲೋ ಮಾಡಿ
Comments

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

, ಆತ್ಮವಿಶ್ವಾಸದಿಂದ ಹಿಡಿದ ಕೆಲಸವನ್ನು ಮಾಡುವಿರಿ. ಸಮೂಹದಮಧ್ಯೆ ಉತ್ತಮವಾಗಿ ಮಾತ ನಾಡಿ ಅವರ ಮನ ಗೆಲ್ಲುವಿರಿ.ಗುರುಹಿರಿಯರ ಮಾತು ಗಳು ನಿಮಗೆ ಬಹಳ ಅನುಕೂಲವಾಗುತ್ತದೆ. ಸ್ಥಿರಾಸ್ತಿ ಮಾಡುವ ವಿಚಾರದಲ್ಲಿ ಶುಭ ಸೂಚನೆಗಳು ಈಗ ಕಾಣುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ದೊರಕುತ್ತದೆ,ಅದರಲ್ಲೂಮಹಿಳಾವಿದ್ಯಾರ್ಥಿ ಗಳಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಕಣ್ಣಿನ ತೊಂದರೆ ಅಥವಾ ರಕ್ತ ಸಂಬಂಧಿ ತೊಂದರೆಗಳಿರುವವರು ಚಿಕಿತ್ಸೆಗೆ ಹೋಗುವುದು ಉತ್ತಮ. ವಿವಾಹ ಅಪೇಕ್ಷಿತ ರಿಗೆ ಸಂಬಂಧಗಳು ಒದಗಿಬರುವ ಸಾಧ್ಯತೆ ಗಳಿವೆ. ಧನದಾಯವು ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ. ಕೃಷಿಕರಿಗೆ ಹೆಚ್ಚಿನಆದಾಯವು ಬರುವ ಸಾಧ್ಯತೆಗಳಿವೆ. ತಂದೆಯಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅನುಕೂಲ ಒದಗಬಹುದು. ವಿದೇಶಕ್ಕೆ ಹೋಗಬೇಕೆನ್ನುವರ ಆಸೆ ಈಡೇರವ ಸಾಧ್ಯತೆ ಇದೆ.

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಹೆಚ್ಚು ಅಲಂಕಾರಿಕವಾಗಿ ಕಾಣಿಸಿಕೊಳ್ಳಲು ಪ್ರಯತ್ನ ಮಾಡುವಿರಿ.ಮಾತನಾಡುವಾಗ ಬುದ್ಧಿವಂತಿ ಕೆಯಿಂದ ಮಾತನಾಡಿ ದೂಷಣೆಯಿಂದ ತಪ್ಪಿಸಿಕೊಳ್ಳು ವಿರಿ. ಚುರುಕಾಗಿ ಕೆಲಸಮಾಡಿ ಸ್ವಚ್ಛತೆಯಕಡೆಗೆ ಹೆಚ್ಚು ಗಮನ ಕೊಡುವಿರಿ. ಆಸ್ತಿಯನ್ನು ,ಕೊಳ್ಳುವ ಸಂಬಂಧ ದಲ್ಲಿ ಸಂಗಾತಿಯು ನಿಮಗೆಸಹಾಯಮಾಡುವರು. ಗಣಿತ ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಮಕ್ಕಳ ಅಭಿವೃದ್ಧಿಯ ಬಗ್ಗೆ ಉತ್ತಮವಾದ ವಾರ್ತೆಗ ಳನ್ನು ಕೇಳುವಿರಿ. ಸಾಂಪ್ರದಾಯಿಕ ಔಷಧಿಗಳಿಂದ ಹಳೆಯ ಕಾಯಿಲೆಗಳು ದೂರವಾಗುತ್ತವೆ. ಸಂಗಾತಿಗೆ ಕೃಷಿಯಲ್ಲಿ ಆಸಕ್ತಿ ಹೆಚ್ಚಾಗಬಹುದು. ಕೃಷಿಕರಿಗೆ ಕೃಷಿ ಯಿಂದ ಬರುವ ಆದಾಯ ಕಡಿಮೆಯಾಗುವ ಸಾಧ್ಯತೆ ಇದೆ. ವಿದೇಶಿ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಧನಾದಾಯವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ.


ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ವಾರದ ಆರಂಭ ಸಂತೋಷದಾಯಕವಾಗಿ ರುತ್ತದೆ. ನಿರೀಕ್ಷಿತ ಮೂಲಗಳಿಂದ ದನದಾಯವು ಬರುತ್ತದೆ. ಬುದ್ಧಿವಂತಿಕೆಯಿಂದ ಹಿರಿಯರೊಡನೆ ವ್ಯವಹರಿಸಿ ನಿಮ್ಮ ಕೆಲಸ ಸಾಧಿಸಿಕೊಳ್ಳುವಿರಿ. ಸ್ಥಿರಾಸ್ತಿ ಮಾಡುವ ವಿಚಾರದಲ್ಲಿ ಪ್ರಗತಿಯನ್ನು ಕಾಣಬಹುದು. ಕೃಷಿಯಿಂದ ಹೆಚ್ಚು ಆದಾಯ ವಿರುತ್ತದೆ. ಹೈನುಗಾರಿಕೆ ಮಾಡುವವರಿಗೆ ಆದಾಯ ವೃದ್ಧಿಸುತ್ತದೆ.ಸಂಗೀತಗಾರ ರಿಗೆ ಆದಾಯ ಹೆಚ್ಚುವ ಸಾಧ್ಯತೆ ಇದೆ. ಶಸ್ತ್ರಚಿಕಿತ್ಸೆಯ ಹಂತಕ್ಕೆ ಹೋಗಿದ್ದ ಕೆಲವುಕಾಯಿಲೆಗಳು ಔಷಧದಿಂದ ಪರಿಹಾರವಾಗಬಹುದು. ಅವಿವಾಹಿತರಿಗೆ ವಿವಾಹ ಸಂಬಂಧಗಳು ಒದಗಬಹುದು.ವಿದೇಶದಲ್ಲಿದುಡಿಯು ತ್ತಿರುವವರಿಗೆ ಆದಾಯ ಹೆಚ್ಚುವ ಸಾಧ್ಯತೆ ಇದೆ. ಸಾಕಷ್ಟು ಪ್ರಯತ್ನ ಪಡುತ್ತಿರುವವರಿಗೆ ವಿದೇಶದಲ್ಲಿ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಪಿತ್ರಾರ್ಜಿತ ಆಸ್ತಿ ಬರುವ ಲಕ್ಷಣಗಳಿವೆ. ಉದ್ಯೋಗದಲ್ಲಿ ಪ್ರಗತಿ ಯನ್ನು ಕಾಣಬಹುದು.


ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ಒಂದು ರೀತಿಯ ಹುಮ್ಮಸ್ಸು ನಿಮ್ಮಲ್ಲಿ ಮನೆ ಮಾಡಿರುತ್ತದೆ. ಹಣದ ಒಳಹರಿವು ನಿರೀಕ್ಷಿತ ಮಟ್ಟದಲ್ಲಿರುತ್ತದೆ. ಅತ್ಯಂತಚುರುಕಾಗಿ ಓಡಾಡಿ ಜಾಣ ತನದಿಂದ ಕೆಲಸಸಾಧಿಸುವಿರಿ.ಆಶಿಸುತ್ತಿದ್ದಕೃಷಿಭೂಮಿ ಯನ್ನು ಕೊಳ್ಳಬಹುದು. ಕೃಷಿಯಿಂದ ಸ್ವಲ್ಪಮಟ್ಟಿನ ಆದಾಯವಿರುತ್ತದೆ. ಉದ್ಯೋಗದಲ್ಲಿ ಆದಾಯ ಹೆಚ್ಚಾ ದರೂ ಸಹ ಅಷ್ಟೇ ಖರ್ಚು ಇರುತ್ತದೆ. ಸಂಗಾತಿಯ ನಡುವೆ ಮುಸುಕಿನಮೌನ ಇರಬಹುದು. ಹಿರಿಯರ ಸಹಾಯದಿಂದ ಉದ್ಯೋಗದಲ್ಲಿ ಮೇಲ್ದರ್ಜೆಗೇರುವ ಅವಕಾಶವಿದೆ. ಕಚೇರಿಯ ಕೆಲಸದ ಮೇಲೆ ದೂರದ ಊರಿಗೆ ಅಥವಾ ವಿದೇಶಕ್ಕೆ ಹೋಗಿ ಬರುವ ಯೋಗ ವಿದೆ. ವ್ಯಾಪಾರ ವ್ಯವಹಾರಗಳಲ್ಲಿ ಖಂಡಿತ ಲಾಭವಿ ರುತ್ತದೆ. ಅದಿರು ಮಾರಾಟಗಾರರಿಗೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಬಹುದು. ಸರ್ಕಾರಿ ವ್ಯವಹಾರಗಳಲ್ಲಿ ನಿಧಾನ ಗತಿಯನ್ನು ಕಾಣಬಹುದು.


ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಕೌಶಲ್ಯಯುತವಾಗಿ ಮಾತನಾಡಿ ನಿಮ್ಮ ಗುರಿ ಸಾಧಿಸುವಿರಿ. ನೃತ್ಯಪಟುಗಳಿಗೆ ಹೆಚ್ಚಿನಅವಕಾಶ ದೊರೆಯುವ ಸಾಧ್ಯತೆ ಇದೆ. ಸರ್ಕಾರಿ ಸಹಾಯಧನ ಗಳು ಸಾರಾಗವಾಗಿಸಿಗುತ್ತವೆ. ಸರ್ಕಾರದಜೊತೆಮಾಡಿ ಕೊಂಡ ವ್ಯವಹಾರ ಒಪ್ಪಂದಗಳಲ್ಲಿ ನಿಮಗೆ ಹೆಚ್ಚು ಲಾಭವಿರುತ್ತದೆ. ಭೂಮಿ ವ್ಯಾಪಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಅಧ್ಯಾಪಕರಿಗೆ ಉತ್ತಮ ಹೆಸರು ಮತ್ತು ಗೌರವದೊರೆಯುವ ಸಾಧ್ಯತೆಇದೆ.ಸಂಗಾತಿಯ ಅಧಿಕಖರ್ಚು ಹೊಸ ಚಿಂತೆಯನ್ನು ಹುಟ್ಟು ಹಾಕಬ ಹುದು. ಕೊಟ್ಟಿದ್ದ ಹಳೆಯ ಸಾಲಗಳಲ್ಲಿ ಸ್ವಲ್ಪ ಭಾಗ ವಾಪಸ್ ಬರುವ ಸಾಧ್ಯತೆ ಇದೆ. ಬಟ್ಟೆಯ ಮೇಲೆ ಕಸೂತಿ ಕೆಲಸ ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ. ಬೆಳ್ಳಿಯ ಅಲಂಕಾರಿಕ ವಸ್ತುಗಳನ್ನು ತಯಾರಿಸು ವವರಿಗೆ ಹೆಚ್ಚು ಕೆಲಸಗಳು ದೊರೆಯುತ್ತವೆ. ಹಣದ ಒಳಹರಿವು ಮಧ್ಯಮ ಗತಿಯಲ್ಲಿರುತ್ತದೆ.


ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಅತಿಯಾದ ಗತ್ತು ನಿಮಗೆ ಮುಜುಗರ ತರುವಂತಹ ವಾತಾವರಣವನ್ನು ನಿರ್ಮಾಣ ಮಾಡ ಬಹುದು. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿ ರುತ್ತದೆ. ನಿಮ್ಮ ನಡವಳಿಕೆ ಸಾಕಷ್ಟು ವ್ಯಾವಹಾರಿಕವಾ ಗಿರುತ್ತದೆ. ಸಂಸಾರದಲ್ಲಿ ಸ್ವಲ್ಪಮಟ್ಟಿನ ಮುಸುಕಿನ ಗುದ್ದಾಟಗಳಿರುತ್ತವೆ.ವಿದ್ಯಾರ್ಥಿಗಳಿಗೆನಿರೀಕ್ಷಿತಮಟ್ಟದ ಯಶಸ್ಸು ಇರುವುದಿಲ್ಲ ಸಾಲಕೊಟ್ಟವರು ಬಂದು ಹಣ ವಾಪಸಿಗೆ ಬೇಡಿಕೆ ಇಡುವರು. ಸಂಗಾತಿಯ ಆದಾಯ ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ. ವಿದೇಶಿ ಹಣವಿನಿ ಮಯ ಮಾಡುವವರಿಗೆ ಆದಾಯವಿರುತ್ತದೆ. ಹಿರಿಯ ರಿಂದ ಸಿಗುವ ಸಹಾಯಗಳು ಕಡಿಮೆಯಾಗಬಹುದು. ಉದ್ಯೋಗದಲ್ಲಿ ಇದ್ದ ಗೋಜಲುಗಳು ಕಡಿಮೆಯಾ ಗುವ ಲಕ್ಷಣಗಳಿವೆ. ಹೈನುಗಾರಿಕೆ ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಲಾಭ ಹೆಚ್ಚುವ ಸಂದರ್ಭವಿದೆ.


ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ವಾರದ ಆರಂಭದಲ್ಲಿ ನಿಮ್ಮಲ್ಲಿ ಆಕ್ರೋಶ ಮನೆ ಮಾಡಿರುತ್ತದೆ. ನಿಮ್ಮ ಕೋಪ ನಿಮ್ಮ ಕೆಲವು ಆಪ್ತಮಿತ್ರರನ್ನು ದೂರ ಮಾಡಬಹುದು. ಕೃಷಿಕರಿಗೆ ಅವರು ಬೆಳೆದ ಬೆಳೆಗಳಿಂದ ಆದಾಯ ಬರುತ್ತದೆ. ನಿಮ್ಮೆಲ್ಲಾ ಕಾರ್ಯಗಳಿಗೆ ಸಂಗಾತಿಯ ಸಹಾಯಗಳು ಸ್ವಲ್ಪಮಟ್ಟಿಗೆ ದೊರೆಯುತ್ತವೆ. ರಾಜಕೀಯ ವ್ಯಕ್ತಿಗಳಿಗೆ ಅವರಾಡಿದ ಮಾತುಗಳಿಂದ ದೂಷಣೆಗೆ ಒಳಗಾಗುವ ಸಂದರ್ಭವಿದೆ. ಕೆಲವು ರಾಜಕೀಯ ನಾಯಕರುಗಳ ಸ್ಥಾನ ಹೆಚ್ಚಾಗಬಹುದು. ಸಂಗಾತಿಯ ಆರೋಗ್ಯಕ್ಕಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ. ಕೆಲವರಿಗೆ ವಿದೇಶದ ಲ್ಲಿರುವ ಸಂಗಾತಿಯನ್ನು ಹೋಗಿ ಸೇರಿಕೊಳ್ಳುವ ಅವ ಕಾಶವಿದೆ. ಸಿದ್ಧ ಉಡುಪು ತಯಾರಕರಿಗೆ ವ್ಯವಹಾರ ದಲ್ಲಿ ಹೆಚ್ಚಿನ ಲಾಭವಿರುತ್ತದೆ. ನೃತ್ಯ ಸಂಯೋಜನೆ ಮಾಡುವವರಿಗೆ ಆದಾಯ ಹೆಚ್ಚಬಹುದು. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ನಿಧಾನ ಗತಿ ಇರುತ್ತದೆ.


ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)

ಸ್ವಲ್ಪ ನಿರ್ಲಿಪ್ತತೆ ನಿಮ್ಮನ್ನು ಆವರಿಸಿಕೊಳ್ಳ ಬಹುದು, ಇದು ತಾತ್ಕಾಲಿಕ ಮಾತ್ರ. ಧನದಾಯವು ಮಂದಗತಿಯಲ್ಲಿರುತ್ತದೆ. ಕೃಷಿಯಲ್ಲಿ ಹೆಚ್ಚು ಆಸಕ್ತಿ ಮೂಡುತ್ತದೆ. ರಾಜಕೀಯಕ್ಕೆ ಸೇರಬೇಕೆಂದು ಓಡಾ ಡುವ ಕೆಲಜನರಿಗೆ ನಿರಾಸೆಯಾಗಬಹುದು. ವಿದ್ಯಾರ್ಥಿ ಗಳಿಗೆ ಮಧ್ಯಮ ದರ್ಜೆಯ ಫಲಿತಾಂಶ ವಿರುತ್ತದೆ. ಲೇವಾದೇವಿ ವ್ಯವಹಾರಗಳು ಖಂಡಿತ ಬೇಡ. ಮೂಳೆ ನೋವುಗಳು ಇರುವವರು ವೈದ್ಯಕೀಯ ತಪಾಸಣೆ ಮಾಡಿಸುವುದು ಮುಖ್ಯ. ಸಂಗಾತಿಯ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು.ಅನಿರೀಕ್ಷಿತವಾಗಿ ಸರ್ಕಾರಿ ವ್ಯವಹಾರಗಳಲ್ಲಿ ಲಾಭ ಬರುವ ಸಾಧ್ಯತೆ ಇದೆ. ತಾಯಿ ಯಿಂದ ನಿಮ್ಮಕೆಲಸಕಾರ್ಯಗಳಿಗೆ ಹೆಚ್ಚಿನ ಉತ್ತೇಜನ ದೊರೆಯುತ್ತದೆ. ವೃತ್ತಿಯಲ್ಲಿ ಸಂತೋಷದಾಯಕವಾದ ವಾತಾವರಣವಿರುತ್ತದೆ. ಆಭರಣ ತಯಾರಕರಿಗೆ ಹೆಚ್ಚಿನ ತಯಾರಿಕಾ ಆದೇಶಗಳು ದೊರೆಯಬಹುದು.


ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )

ಆತ್ಮವಿಶ್ವಾಸವು ಹೆಚ್ಚಾಗಿರುತ್ತದೆ ನಿಮ್ಮ ಕಾರ್ಯ ಸಾಧನೆಯ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ನಿಮ್ಮ ಹಿತ ಶತ್ರುಗಳನ್ನು ಗುರುತಿಸಿ ಅವ ರನ್ನು ತರಾಟೆಗೆ ತೆಗೆದುಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ರೀತಿಯ ಯಶಸ್ಸು ಇರುತ್ತದೆ. ವಾಯು ಯಾನ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚು ಅಭಿವೃದ್ಧಿ ಇರುತ್ತದೆ. ಹಿರಿಯರಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಸಂಗಾತಿಗೆ ಉತ್ತಮ ರೀತಿಯ ವೃತ್ತಿ ದೊರೆಯುವ ಸಾಧ್ಯತೆ ಇದೆ. ಕೃಷಿಕರಿಗೆ ನಿರೀಕ್ಷಿತ ಮಟ್ಟದ ಲಾಭ ಬರುವ ಸಾಧ್ಯತೆ ಇದೆ. ಗೃಹಲಂಕಾರ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ವ್ಯವಹಾರ ಹೆಚ್ಚಾಗುತ್ತದೆ. ಧನದಾಯವು ಮಂದಗತಿಯಲ್ಲಿರು ತ್ತದೆ. ಸರ್ಕಾರಿ ವೃತ್ತಿಯಲ್ಲಿರುವವರಿಗೆ ಅಭಿವೃದ್ಧಿ ಹೆಚ್ಚುತ್ತದೆ. ಸರ್ಕಾರಿ ಸಂಸ್ಥೆಗಳ ಜೊತೆಗಿನ ವ್ಯವಹಾರ ಗಳಲ್ಲಿ ಲಾಭವಿರುತ್ತದೆ.


ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಬಹಳ ಶ್ರದ್ದೆಯಿಂದ ಕೆಲಸ ಮಾಡಿ ಉತ್ತಮ ಹೆಸರು ಗಳಿಸುವಿರಿ. ಮಾತನಾಡುವಾಗ ಎಚ್ಚರಿಕೆ ಇರಲಿ.ಆಸ್ತಿ ಕೊಳ್ಳುವ ವಿಚಾರದಲ್ಲಿ ಹಣ ಒದಗಿದರೂ ಸಹ ದಾಖಲೆ ಪರಿಶೀಲನೆ ಮಾಡಿ ಮುಂದುವರೆಯಿರಿ. ವಾಹನಗಳ ಬಿಡಿ ಭಾಗಗಳನ್ನು ಮಾರಾಟ ಮಾಡುವ ವರಿಗೆ ಹೆಚ್ಚಿನ ಲಾಭವಿರುತ್ತದೆ. ಯಂತ್ರೋಪಕರಣಗ ಳನ್ನು ರಿಪೇರಿ ಮಾಡುವವರಿಗೆ ಕೈ ತುಂಬಾ ಕೆಲಸವಿರು ತ್ತದೆ. ಮಕ್ಕಳ ವಿಚಾರದಲ್ಲಿ ಅವರ ನಡವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿರಿ. ನಿಮ್ಮ ತಾಯಿಯಿಂದ ನೀವು ಮಾಡುವ ಕೆಲಸಗಳಿಗೆ ಸಾಕಷ್ಟು ಪ್ರೇರೇಪಣೆ ಮತ್ತು ಸಹಾಯ ದೊರೆಯುತ್ತದೆ. ಹಣಕಾಸಿನ ವ್ಯವಹಾರಗ ಳಲ್ಲಿ ವ್ಯತ್ಯಾಸಗಳಾಗುವ ಸಾಧ್ಯತೆ ಇದೆ.ಧನದಾಯವು ಮಂದಗತಿಯಲ್ಲಿರುತ್ತದೆ. ಮಹಿಳೆಯರು ನಡೆಸುವ ವ್ಯವಹಾರಗಳಲ್ಲಿ ಆದಾಯ ಇರುತ್ತದೆ. ತಂದೆಯಿಂದ ವ್ಯವಹಾರದ ಬಗ್ಗೆ ಸಾಕಷ್ಟು ತಿಳುವಳಿಕೆ ದೊರೆಯುತ್ತದೆ.


ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಸಾಂಪ್ರದಾಯಿಕ ಕೃಷಿಯ ಕಡೆಗೆ ಹೆಚ್ಚು ಆಸಕ್ತಿಮೂಡುತ್ತದೆ. ಹಿರಿಯರು ಎಲ್ಲರೊಂದಿಗೆ ಸಮಾ ಧಾನವಾಗಿ ಮಾತನಾಡಿ ತಿಳುವಳಿಕೆ ನೀಡುವರು. ವಿದೇಶಿ ಹಣಕಾಸಿನ ಸಂಸ್ಥೆಗಳಲ್ಲಿ ಕೆಲಸ ಮಾಡುವವ ರಿಗೆ ಅಭಿವೃದ್ಧಿ ಇರುತ್ತದೆ. ಧಾನ್ಯಗಳ ಬೀಜೋತ್ಪಾದನೆ ಮಾಡಲು ಮುಂದಾಗುವಿರಿ. ಈಗಾಗಲೇ ಧಾನ್ಯಗಳ ಬೀಜೋತ್ಪಾದನೆ ಮಾಡುತ್ತಿರುವವರಿಗೆ ಬೇಡಿಕೆ ಹೆಚ್ಚಾ ಗುತ್ತದೆ. ವ್ಯಾಪಾರದಲ್ಲಿನ ಸರ್ಕಾರಿ ಕಾನೂನಿನ ತೊಡ ಕುಗಳು ಬಗೆಹರಿಯವತ್ತ ಹೊರಳುತ್ತದೆ. ಶೀತ ಬಾಧೆ ಇರುವವರು ಸಾಕಷ್ಟುಎಚ್ಚರ ವಹಿಸಿರಿ. ಸಂಗಾತಿ ಯಿಂದ ನಿಮ್ಮ ಕೆಲಸಕಾರ್ಯಗಳಿಗೆ ಸಹಕಾರದ ಜೊತೆ ಧನಸಹಾಯ ದೊರೆಯಬಹುದು. ಕೃಷಿಕರಿಗೆ ನಿರೀಕ್ಷಿತ ಆದಾಯ ಬರುವುದು ಸ್ವಲ್ಪ ಕಷ್ಟ. ಧನಾದಾಯವು ಮಧ್ಯಮ ಗತಿಯಲ್ಲಿರುತ್ತದೆ. ವೃತ್ತಿ ರಂಗದಲ್ಲಿ ಸ್ವಲ್ಪ ಮಟ್ಟಿನ ತೊಡಕುಗಳು ಎದುರಾಗ ಬಹುದು.


ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ನಿಮ್ಮನ್ನು ನೀವು ಅತ್ಯಂತ ಪ್ರಭಾವಿಗಳೆಂದು ಪರಿಭಾವಿಸುವಿರಿ. ಹಣದ ಒಳ ಹರಿವು ಉತ್ತಮವಾಗಿ ದ್ದರೂ ಸಹ ಅದು ನಿಮಗೆ ತಲುಪುವುದು ನಿಧಾನವಾ ಗಬಹುದು. ಆರೋಗ್ಯ ವ್ಯತ್ಯಾಸಗಳು ನಿಮ್ಮನ್ನು ಸ್ವಲ್ಪ ಕಾಡಬಹುದು. ಆಸ್ತಿ ಕೊಳ್ಳುವ ವಿಚಾರದಲ್ಲಿ ನಿರೀಕ್ಷಿತ ಮೂಲಗಳಿಂದ ಹಣ ಒದಗಿ ಬರುತ್ತದೆ. ವಿದ್ಯಾರ್ಥಿಗ ಳಿಗೆ ಅವರ ಶ್ರಮಕ್ಕೆ ತಕ್ಕಂತೆ ಫಲ ದೊರೆಯುತ್ತದೆ. ಲೇವಾದೇವಿಯಂತಹ ಹಣಕಾಸಿನ ವ್ಯವಹಾರಮಾಡು ವುದು ಅಷ್ಟು ಶ್ರೇಯಸ್ಕರವಲ್ಲ. ಗುತ್ತಿಗೆದಾರರಿಗೆ ಈಗ ಸರ್ಕಾರಿ ಗುತ್ತಿಗೆಗಳು ದೊರೆಯುವ ಸಾಧ್ಯತೆ ಇದೆ. ಕಟ್ಟಡ ಕಾರ್ಮಿಕರಿಗೆ ಉತ್ತಮ ಕೆಲಸದೊರೆತು ಸಂಪಾ ದನೆ ಹೆಚ್ಚುತ್ತದೆ. ಉದ್ಯೋಗ ಸ್ಥಳದಲ್ಲಿ ಸ್ವಲ್ಪ ಕಿರಿಕಿರಿ ಆಗುವಂತಹ ವಾತಾವರಣಗಳು ಇರುತ್ತವೆ. ದಿನಸಿ ವ್ಯಾಪಾರಿಗಳಿಗೆ ವ್ಯಾಪಾರ ವಿಸ್ತರಿಸಿ ಲಾಭ ಹೆಚ್ಚುತ್ತದೆ. ಕಾಲ ನೋವುಗಳ ಬಗ್ಗೆ ಹೆಚ್ಚಿನ ಗಮನವಿರಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT