ಪೊಲೀಸರೇ ಓಡಿಸಿದ್ದು ಎಂದ ಬಲಿಪಶು
ಸಂತೋಷ್ನ ಕತ್ತಿನಿಂದ ಧಾರಾಕಾರವಾಗಿ ನೆತ್ತರು ಹರಿದಿದೆ. ಹೊಲದಿಂದ ಆತನನ್ನು ಹೊರಗೆ ಕರೆದುಕೊಂಡು ಬರುವ ವಿಡಿಯೋ ವೈರಲ್ ಆಗಿದೆ. ಆತನನ್ನು ಗ್ರಾಮಸ್ಥರು ವಾಹನವೊಂದರಲ್ಲಿ 40 ಕಿಮೀ ದೂರದ ಪಂಧಾನಾದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಬ್ಯಾಂಡೇಜ್ ಸುತ್ತಿಕೊಂಡು ಹಾಸಿಗೆ ಮೇಲೆ ಮಲಗಿದ್ದ ಸಂತೋಷ್, ಈ ಘಟನೆ ಬಗ್ಗೆ ಹೇಳಿಕೆ ನೀಡಿದ್ದಾನೆ. "ಹೊಲದ ಇನ್ನೊಂದು ಬದಿಯಿಂದ ಪೊಲೀಸರು ಹುಲಿಯನ್ನು ಬೆದರಿಸಿದ ಕಾರಣ ಅದು ನನ್ನ ಮೇಲೆ ದಾಳಿ ಮಾಡಿದೆ. ನಾನು ತೂಕದ ವ್ಯಕ್ತಿ. ಹೀಗಾಗಿ ನಾನು ಅದನ್ನು ದೂರ ತಳ್ಳಿದೆ. ಇಲ್ಲದಿದ್ದರೆ ಹುಲಿ ನನ್ನನ್ನು ಕಚ್ಚಿ ಎಳೆದಯ್ಯುತ್ತಿತ್ತು" ಎಂದು ಸ್ಥಳೀಯ ಮಾಧ್ಯಮದವರಿಗೆ ತಿಳಿಸಿದ್ದಾನೆ.