ADVERTISEMENT

a22m1 test video

sub

ಶಿವಕುಮಾರ್ ಎಚ್ ಎಂ
Published 25 ಏಪ್ರಿಲ್ 2024, 5:31 IST
Last Updated 25 ಏಪ್ರಿಲ್ 2024, 5:31 IST

ನವದೆಹಲಿ, ಜ. 16– ಮೈಸೂರು ಪ್ರದೇಶ ಆಡಳಿತ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ. ದೇವರಾಜ ಅರಸು ಮತ್ತು ಇತರ ಅಧಿಕಾರ ವರ್ಗದವರು ಬರಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿರುವುದರಿಂದ ಇವರುಗಳನ್ನು ಸಂಸ್ಥೆಯ ಅಧಿಕಾರ ಸ್ಥಾನದಿಂದ ತೆಗೆದು ಅವರ ಜಾಗಕ್ಕೆ ಬೇರೆಯವರನ್ನು ನೇಮಕ ಮಾಡುವಂತೆ ನಾಳೆ ಮೈಸೂರು ಪ್ರದೇಶ ಚುನಾವಣೆ ಸಮಿತಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರನ್ನು ಒತ್ತಾಯಪಡಿಸುವ ಸಂಭವವಿದೆ.

ಮಾರ್ಚ್‌ನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ ನಿರ್ದೇಶನ ಸೂತ್ರಗಳನ್ನು ಸಲಹೆ ಮಾಡಲು ಇಂದಿರಾ ಗಾಂಧಿಯವರು ನಾಳೆ ಮೈಸೂರು ಪ್ರದೇಶ ಕಾಂಗ್ರೆಸ್‌ ಚುನಾವಣೆ ಸಮಿತಿ ಸಭೆ ಕರೆದಿದ್ದಾರೆ.

ಮೈಸೂರು, ಜ. 17– ವ್ಯಕ್ತಿ ಮತ್ತು ಸಮಾಜದ ನೈಜ ಅವಶ್ಯಕತೆಗಳನ್ನು ಪೂರೈಸುವ ಶಿಕ್ಷಣ ಕ್ರಮವನ್ನು ಜಾರಿಗೆ ತರಬೇಕಾದ ಅಗತ್ಯ ಕುರಿತು ಕೇಂದ್ರ ಶಿಕ್ಷಣ ಸಚಿವ ಡಾ. ಸಿದ್ಧಾರ್ಥ ಶಂಕರ ರಾಯ್‌ ಅವರು ಇಂದು ಇಲ್ಲಿ ಒತ್ತಿ ಹೇಳಿದರು.

ADVERTISEMENT

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.