ADVERTISEMENT

ಬಾಂಗ್ಲಾದೇಶ: ಇಸ್ಕಾನ್ ದೇಗುಲದ ಮೇಲೆ ದುಷ್ಕರ್ಮಿಗಳಿಂದ ದಾಳಿ, ವ್ಯಕ್ತಿ ಸಾವು

ಪ್ರಜಾವಾ‌ಣಿ ವೆಬ್ ಡೆಸ್ಕ್‌
Published 16 ಅಕ್ಟೋಬರ್ 2021, 6:59 IST
Last Updated 16 ಅಕ್ಟೋಬರ್ 2021, 6:59 IST
ಬಾಂಗ್ಲಾದೇಶದ ನೋವಾಖಲಿ ಪ್ರದೇಶದಲ್ಲಿರುವ ಇಸ್ಕಾನ್ ದೇಗುಲಕ್ಕೆ ಅಪಾರ ಹಾನಿ (ಚಿತ್ರ ಕೃಪೆ: ಇಸ್ಕಾನ್‌ ಟ್ವಿಟರ್ ಖಾತೆ)
ಬಾಂಗ್ಲಾದೇಶದ ನೋವಾಖಲಿ ಪ್ರದೇಶದಲ್ಲಿರುವ ಇಸ್ಕಾನ್ ದೇಗುಲಕ್ಕೆ ಅಪಾರ ಹಾನಿ (ಚಿತ್ರ ಕೃಪೆ: ಇಸ್ಕಾನ್‌ ಟ್ವಿಟರ್ ಖಾತೆ)   

ಢಾಕಾ: ಬಾಂಗ್ಲಾದೇಶದ ನೋವಾಖಲಿ ಪ್ರದೇಶದಲ್ಲಿರುವ ದೇಗುಲದ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿ ಭಕ್ತರ ಮೇಲೆ ಹಲ್ಲೆ ನಡೆಸಿದೆ. ದೇಗುಲಕ್ಕೂ ಅಪಾರ ಹಾನಿಯಾಗಿದೆ. ಒಬ್ಬ ಭಕ್ತರ ಸ್ಥಿತಿ ಗಂಭೀರವಾಗಿದೆ ಎಂದು ‘ಇಸ್ಕಾನ್’ ಟ್ವೀಟ್ ಮಾಡಿದೆ.

ಇಸ್ಕಾನ್ ಸದಸ್ಯರೊಬ್ಬರನ್ನು ಹತ್ಯೆ ಮಾಡಲಾಗಿದ್ದು, ಹಲವಾರು ಭಕ್ತರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

‘ಸುಮಾರು 200 ಮಂದಿ ಇದ್ದ ಗುಂಪು ದೇಗುಲದ ಮೇಲೆ ದಾಳಿ ಮಾಡಿದೆ. ನಮ್ಮ ಸದಸ್ಯ ಪಾರ್ಥ ದಾಸ್ ಅವರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ದೇಗುಲದ ಬಳಿ ಇರುವ ಕೊಳದಲ್ಲಿ ಅವರ ಮೃತದೇಹ ಪತ್ತೆಯಾಗಿದೆ’ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಘಟನೆಗೆ ಸಂಬಂಧಿಸಿ ಬಾಂಗ್ಲಾದೇಶ ಸರ್ಕಾರವು ತಕ್ಷಣ ಕ್ರಮ ಕೈಗೊಳ್ಳಬೇಕು. ಹಿಂದೂಗಳ ಸುರಕ್ಷತೆ ಬಗ್ಗೆ ಭರವಸೆ ನೀಡುವುದರ ಜತೆಗೆ ನ್ಯಾಯ ಕೊಡಿಸಬೇಕು ಎಂದು ಇಸ್ಕಾನ್ ಆಗ್ರಹಿಸಿದೆ.

ಘಟನೆ ಖಂಡಿಸಿ ಇಸ್ಕಾನ್ ಸದಸ್ಯರು ಮತ್ತು ಹಿಂದೂ ಸಮುದಾಯದವರು ನೋವಾಖಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಸಾರಾಂಶ

ಬಾಂಗ್ಲಾದೇಶದ ನೋವಾಖಲಿ ಪ್ರದೇಶದಲ್ಲಿರುವ ದೇಗುಲದ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿ ಭಕ್ತರ ಮೇಲೆ ಹಲ್ಲೆ ನಡೆಸಿದೆ. ದೇಗುಲಕ್ಕೂ ಅಪಾರ ಹಾನಿಯಾಗಿದೆ. ಒಬ್ಬ ಭಕ್ತರ ಸ್ಥಿತಿ ಗಂಭೀರವಾಗಿದೆ ಎಂದು ‘ಇಸ್ಕಾನ್’ ಟ್ವೀಟ್ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.