ADVERTISEMENT

ಅಲ್ಲಮಪ್ರಭು ಸಿನಿಮಾ ಚಿತ್ರೀಕರಣ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 11:47 IST
Last Updated 12 ಅಕ್ಟೋಬರ್ 2021, 11:47 IST
ಡಾ.ಸಂಜಯ್, ಅಂಕಿತಾ
ಡಾ.ಸಂಜಯ್, ಅಂಕಿತಾ   

ಅನುಭಾವಿ ಶಿವಶರಣರ ಕಥೆ ಒಳಗೊಂಡ ‘ಅಲ್ಲಮಪ್ರಭು’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಗಿದೆ. ಡಾ.ಸಂಜಯ್ ಮತ್ತು ಅಂಕಿತಾ ಶಿವ-ಪಾರ್ವತಿಯಾಗಿ‌ ಅಭಿನಯಿಸಿದ ಹಾಡಿನ ಚಿತ್ರೀಕರಣದ ಮೂಲಕ ಮುಕ್ತಾಯವಾಯಿತು. 

ಈ ಚಿತ್ರ ಕನ್ನಡ, ಹಿಂದಿ, ಮರಾಠಿ, ಮಲಯಾಳಂ ಭಾಷೆಯಲ್ಲಿ ಮೂಡಿಬರಲಿದೆ ಎಂದು ನಿರ್ಮಾಪಕ, ಚಿತ್ರಕಥೆಗಾರ ಮಾಧವಾನಂದ ವೈ. ತಿಳಿಸಿದ್ದಾರೆ. ಮಹಾವೀರಪ್ರಭು‌ ಈ ಚಿತ್ರದ ಸಹನಿರ್ಮಾಪಕರು. ಶರಣ್ ಗದ್ವಾಲ್ ನಿರ್ದೇಶನ ಮಾಡಿದ್ದಾರೆ. ಆರ್.ಗಿರಿ ಛಾಯಾಗ್ರಾಹಕರು, ಕುಮಾರ್ ಈಶ್ವರ್‌ ಸಂಗೀತ, ಬಿ.ಎಸ್.ಕೆಂಪರಾಜ್ ಸಂಕಲನ, ರಮೇಶ್ ಬಾಬು ವರ್ಣಾಲಂಕಾರ, ಬೆಳ್ಳಿ ಚುಕ್ಕಿ ವೀರೇಂದ್ರ ವಸ್ತ್ರಾಲಂಕಾರ‌ ಚಿತ್ರಕ್ಕಿದೆ.

ಸಾರಾಂಶ

ಅನುಭಾವಿ ಶಿವಶರಣರ ಕಥೆ ಒಳಗೊಂಡ ‘ಅಲ್ಲಮಪ್ರಭು’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಗಿದೆ. ಡಾ.ಸಂಜಯ್ ಮತ್ತು ಅಂಕಿತಾ ಶಿವ-ಪಾರ್ವತಿಯಾಗಿ‌ ಅಭಿನಯಿಸಿದ ಹಾಡಿನ ಚಿತ್ರೀಕರಣದ ಮೂಲಕ ಮುಕ್ತಾಯವಾಯಿತು.

ADVERTISEMENT

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.