ADVERTISEMENT

Photos| ವಿಜಯನಗರದಲ್ಲಿ‌ 'ಮಾಂಡೂಸ್' ಚಂಡಮಾರುತದ ಪ್ರಭಾವ: ಜಡಿ ಮಳೆಗೆ ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2022, 13:17 IST
Last Updated 10 ಡಿಸೆಂಬರ್ 2022, 13:17 IST
   

ಹೊಸಪೇಟೆ (ವಿಜಯನಗರ): ಬಂಗಾಳ ಕೊಲ್ಲಿಗೆ 'ಮಾಂಡೂಸ್' ಚಂಡಮಾರುತ ಅಪ್ಪಳಿಸಿದ್ದು ಅದರ ಪ್ರಭಾವ ಶನಿವಾರ ಜಿಲ್ಲೆಯಲ್ಲೂ ಕಂಡು ಬಂತು.

ಶನಿವಾರ ದಿನವಿಡೀ ದಟ್ಟ ಮಂಜು ಆವರಿಸಿಕೊಂಡಿತು. ಸಂಜೆಯಿಂದ ಜಿಟಿಜಿಟಿ ಮಳೆ ಆಗಿರುವುದರಿಂದ ವಾತಾವರಣ ಸಂಪೂರ್ಣ ತಂಪಾಗಿದೆ. ದಟ್ಟ ಮಂಜು, ಮಳೆಗೆ ಚಳಿ ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಜಿಲ್ಲೆಯ ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೊಟ್ಟೂರು, ಕೂಡ್ಲಿಗಿಯ ಕೆಲವು ಭಾಗಗಳಲ್ಲಿ ಮಳೆಯಾಗಿದೆ.

ADVERTISEMENT

ಪ್ರಜಾವಾಣಿ ಚಿತ್ರಗಳು: ಲವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.