ADVERTISEMENT

ಹಗರಿಬೊಮ್ಮನಹಳ್ಳಿ | ಬ್ಯಾಟರಿ, ಕಾಪರ್ ವೈರ್ ಕಳವು: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 8:55 IST
Last Updated 16 ಜನವರಿ 2022, 8:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಗರಿಬೊಮ್ಮನಹಳ್ಳಿ (ವಿಜಯನಗರ): ತಾಲ್ಲೂಕಿನ ಹಂಪಸಾಗರ ಗ್ರಾಮದ ರೈತ ತಟ್ಟಿ ಜಗದೀಶ್ ಅವರ ಜಮೀನಿನಲ್ಲಿ ಮೋಟಾರ್, ಸ್ಟಾರ್ಟರ್ ಮತ್ತು ವೈರ್ ಕಳ್ಳತನ ಮಾಡಿದ್ದ ಆರೋಪದ ಮೇರೆಗೆ ನಾಲ್ಕು ಜನ ಕಳ್ಳರನ್ನು ಭಾನುವಾರ ತಾಲ್ಲೂಕಿನ ತಂಬ್ರಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಹೂವಿನ ಹಡಗಲಿಯ ಹನುಮಂತಪ್ಪ ಕೊರವರ, ಹಂಪಸಾಗರ-3 ಗ್ರಾಮದ ಸುರೇಶ ಕೊರವರ,  ಭಜಂತ್ರಿ‌ಜಗದೀಶ, ಕೊಂಬಳಿಯ ಮಾರುತಿ ಬಂಧಿತರು. ಈ ಎಲ್ಲ‌ ಆರೋಪಿತರು ತಂಬ್ರಹಳ್ಳಿಯ ಠಾಣೆಯಲ್ಲಿ ಎರಡು,ಹೊಸಹಳ್ಳಿಯಲ್ಲಿ ಒಂದು, ಗುಡೇಕೋಟೆಯಲ್ಲಿ ಎರಡು, ಹರಪನಹಳ್ಳಿಯಲ್ಲಿ ಒಂದು ಸೇರಿದಂತೆ ಒಟ್ಟು 6 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. 

ಇವರೆಲ್ಲರೂ ಬ್ಯಾಟರಿಗಳನ್ನು ಕಳ್ಳತನ ಮಾಡಿ ಅವುಗಳನ್ನು ತುಂಡರಿಸಿ ಅದರಲ್ಲಿದ್ದ ಕಾಪರ್ ಮಾರಾಟ ಮಾಡುತ್ತಿದ್ದರು.

ADVERTISEMENT

ಸಿಪಿಐ ಟಿ.ಮಂಜಣ್ಣ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಬಂಧಿತರಿಂದ ₹3.5ಲಕ್ಷ ನಗದು, 210 ಮೀಟರ್ ಉದ್ದದ ಕಾಪರ್ ವೈರ್ ಮತ್ತು ಕೃತ್ಯಕ್ಕೆ ಬಳಸಿದ ಎರಡು ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಸಾರಾಂಶ

ತಾಲ್ಲೂಕಿನ ಹಂಪಸಾಗರ ಗ್ರಾಮದ ರೈತ ತಟ್ಟಿ ಜಗದೀಶ್ ಅವರ ಜಮೀನಿನಲ್ಲಿ ಮೋಟಾರ್, ಸ್ಟಾರ್ಟರ್ ಮತ್ತು ವೈರ್ ಕಳ್ಳತನ ಮಾಡಿದ್ದ ಆರೋಪದ ಮೇರೆಗೆ ನಾಲ್ಕು ಜನ ಕಳ್ಳರನ್ನು ಭಾನುವಾರ ತಾಲ್ಲೂಕಿನ ತಂಬ್ರಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.