ADVERTISEMENT

ಬೆಂಗಳೂರಿಗೆ ಕೆಲಸಕ್ಕೆ ಗುಳೆ ಹೋಗಲು ಪತಿ ನಕಾರ: ಪತ್ನಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 8:51 IST
Last Updated 20 ಜನವರಿ 2022, 8:51 IST
   

ಚಿಂಚೋಳಿ (ಕಲಬುರಗಿ ಜಿಲ್ಲೆ): ಗುಳೆ ಹೋಗಲು ಪತಿ ನಿರಾಕರಿಸಿದ್ದಕ್ಕೆ ತಾಲ್ಲೂಕಿನ ರುದ್ನೂರ ಗ್ರಾಮದ ಪತ್ನಿ ಶಾಂತಮ್ಮ ಸಂತೋಷ ಧರಿಮ್ಯಾಲ್ (26) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಗ್ರಾಮದಲ್ಲಿ ಇರುವುದು ಬೇಡ, ಬೆಂಗಳೂರಿಗೆ ಹೋಗಿ ಅಲ್ಲಿಯೇ ದುಡಿದು ಬದುಕೋಣ ಎಂದು ಪತ್ನಿ ಶಾಂತಮ್ಮ ಹೇಳುತ್ತಿದ್ದಳು. ಕೋವಿಡ್ ಮುಗಿದ ಮೇಲೆ ಹೋಗೋಣ, ಈಗ ಬೇಡ ಎಂದು ಹೇಳಿದ್ದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಪತಿ ಸಂತೋಷ ಹೇಳಿಕೆ ನೀಡಿದ್ದಾರೆ.

ದಿಗ್ಗಾಂವ್ ಗ್ರಾಮದ ಶಾಂತಮ್ಮ ಅವರನ್ನು ರುದ್ನೂರಿನ ಸಂತೋಷ ಎಂಬುವವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸುಲೇಪೇಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT
ಸಾರಾಂಶ

ಗುಳೆ ಹೋಗಲು ಪತಿ ನಿರಾಕರಿಸಿದ್ದಕ್ಕೆ ತಾಲ್ಲೂಕಿನ ರುದ್ನೂರ ಗ್ರಾಮದ ಪತ್ನಿ ಶಾಂತಮ್ಮ ಸಂತೋಷ ಧರಿಮ್ಯಾಲ್ (26) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.