ADVERTISEMENT

ಜಮೀನುಗಳ ಬದುಗಳಲ್ಲಿ ಗಿಡ ನೆಡುವಂತೆ ರೈತರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2024, 13:09 IST
Last Updated 10 ಜೂನ್ 2024, 13:09 IST
ರಟ್ಟೀಹಳ್ಳಿ ತಾಲ್ಲೂಕು ಕುಂಚೂರ ಗ್ರಾಮದಲ್ಲಿ ಸೋಮವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೃಷಿ ಇಲಾಖೆ ಅರಣ್ಯ ಘಟಕದ ವತಿಯಿಂದ ನರೇಗಾ ಯೋಜನೆಯಡಿ ರೈತರ ಬದುಗಳಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಶಾಸಕ ಯು.ಬಿ. ಬಣಕಾರ ಚಾಲನೆ ನೀಡಿದರು
ರಟ್ಟೀಹಳ್ಳಿ ತಾಲ್ಲೂಕು ಕುಂಚೂರ ಗ್ರಾಮದಲ್ಲಿ ಸೋಮವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೃಷಿ ಇಲಾಖೆ ಅರಣ್ಯ ಘಟಕದ ವತಿಯಿಂದ ನರೇಗಾ ಯೋಜನೆಯಡಿ ರೈತರ ಬದುಗಳಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಶಾಸಕ ಯು.ಬಿ. ಬಣಕಾರ ಚಾಲನೆ ನೀಡಿದರು    

ರಟ್ಟೀಹಳ್ಳಿ: ರೈತರು ತಮ್ಮ ಜಮೀನುಗಳ ಬದುಗಳಲ್ಲಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಶಾಸಕ ಯು.ಬಿ.ಬಣಕಾರ ಸಲಹೆ ನೀಡಿದರು.

ತಾಲ್ಲೂಕಿನ ಕುಂಚೂರ ಗ್ರಾಮದಲ್ಲಿ ಸೋಮವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೃಷಿ ಇಲಾಖೆ ಅರಣ್ಯ ಘಟಕದ ವತಿಯಿಂದ ನರೇಗಾ ಯೋಜನೆಯಡಿ ರೈತರ ಬದುಗಳಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕುಂಚೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ದೀಪಾ ತೊಗರಿಕಟ್ಟಿ, ಅರಣ್ಯಾಧಿಕಾರಿ ಆರ್.ಎಸ್. ಕಚವಿ. ಮುಖಂಡರಾದ ಕನ್ನಪ್ಪ ಮೇಗಳಮನಿ ಹನುಮಂತಪ್ಪ ಹೊಸಳ್ಳಿ, ಪರಮೇಶಪ್ಪ ಸೋಮನಹಳ್ಳಿ, ಗದಿಗೆಪ್ಪ ಬನ್ನಿಹಟ್ಟಿ, ವೀರಭದ್ರಪ್ಪ ಬನ್ನಿಹಟ್ಟಿ, ಕುಮಾರ ಮೇಗಳಮನಿ, ಬಸವಂತಪ್ಪ ಇದರಮನಿ, ನಾಗರಾಜ ಬೆನಕನಕೊಂಡ, ನಾಗರಾಜ ಮೇಗಳಮನಿ, ಹೊಳಬಸಪ್ಪ ಸೋಮನಹಳ್ಳಿ, ಚನ್ನಬಸಪ್ಪ ಕಿಟ್ಟದ, ನೀಲಕಂಠಪ್ಪ ಗೊಡ್ಡೆಮ್ಮಿ ಉಪಸ್ಥಿತರಿದ್ದರು.

ADVERTISEMENT

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.