ADVERTISEMENT

ಹುಬ್ಬಳ್ಳಿ: ರಾಷ್ಟ್ರಮಟ್ಟಕ್ಕೆ ನೇಹಾರ ಸಂಶೋಧನಾ ಪ್ರಬಂಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 16:32 IST
Last Updated 21 ಜನವರಿ 2022, 16:32 IST
ನೇಹಾ ಎಲ್.ಆರ್
ನೇಹಾ ಎಲ್.ಆರ್   

ಹುಬ್ಬಳ್ಳಿ: ನಗರದ ಭಾವದೀಪ ಶಿಕ್ಷಣ ಸಂಸ್ಥೆಯ ವಿಮಲಾಬಾಯಿ ಮೆಮೋರಿಯಲ್ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ನೇಹಾ ಎಲ್.ಆರ್ ಇತ್ತೀಚೆಗೆ ಜರುಗಿದ ‘ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ– 2021’ದಲ್ಲಿ ಮಂಡಿಸಿದ್ದ ‘ಬಟ್ಟೆ ಬ್ಯಾಗ್ ಬಳಸೋಣ-ಪ್ಲಾಸ್ಟಿಕ್ ಚೀಲ ತ್ಯಜಿಸೋಣ’ ಎಂಬ ಸಂಶೋಧನಾ ಪ್ರಬಂಧವು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ಶಾಲೆಯ ವಿಜ್ಞಾನ ಶಿಕ್ಷಕಿ ಅಕ್ಷತಾ ಕುರ್ಡೇಕರ ಮಾರ್ಗದರ್ಶನ ನೀಡಿದ್ದರು.

ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ರಾಜ್ಯ ವಿಜ್ಞಾನ ಪರಿಷತ್ತು ಇತ್ತೀಚೆಗೆ ಸಮಾವೇಶ ಹಮ್ಮಿಕೊಂಡಿತ್ತು.

‘ಸುಸ್ಥಿರ ಜೀವನಕ್ಕಾಗಿ ವಿಜ್ಞಾನ’ ಎಂಬ ವಿಷಯದಡಿ ನಡೆದಿದ್ದ ಆನ್‍ಲೈನ್ ಸಮಾವೇಶದಲ್ಲಿ ರಾಜ್ಯದ ಜಿಲ್ಲೆಗಳಿಂದ ಆಯ್ಕೆಯಾದ 300 ಯೋಜನೆಗಳಲ್ಲಿ 30 ಯೋಜನೆಗಳನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡಲಾಗಿದೆ. ಅದರಲ್ಲಿ ನೇಹಾ ಪ್ರಬಂಧವೂ ಸೇರಿದೆ. ಇದಕ್ಕಾಗಿ ಮೂರು ತಿಂಗಳು ಅಧ್ಯಯನ ನಡೆಸಿದ್ದ ನೇಹಾ, 62 ಮನೆಗಳನ್ನು ಸಂದರ್ಶಿಸಿ ಕಸದ ನಿರ್ವಹಣೆ, ಪ್ಲಾಸ್ಟಿಕ್ ಕಸದ ಸಮಸ್ಯೆಗಳು, ಪ್ಲಾಸ್ಟಿಕ್ ಚೀಲಗಳಿಗೆ ಪರ್ಯಾಯವಾಗಿ ಬಟ್ಟೆ ಚೀಲಗಳ ಬಳಕೆ ಕುರಿತು ವರದಿ ತಯಾರಿಸಿದ್ದಳು.

ADVERTISEMENT

ಕಳೆದ ವರ್ಷವೂ ನೇಹಾ ಮಂಡಿದ್ದ ‘ಕಷಾಯ ಕುಡಿಯೋಣ-ಕೊರೊನಾ ಓಡಿಸೋಣ’ ಪ್ರಬಂಧ ನಿರ್ಣಾಯಕರ ಮೆಚ್ಚುಗೆಗೆ ಪಾತ್ರವಾಗಿತ್ತು ಎಂದು ಶಾಲೆಯ ಮುಖ್ಯ ಶಿಕ್ಷಕಿ ಶ್ರೀದೇವಿ ಮಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರಾಂಶ

ಹುಬ್ಬಳ್ಳಿ ನಗರದ ಭಾವದೀಪ ಶಿಕ್ಷಣ ಸಂಸ್ಥೆಯ ವಿಮಲಾಬಾಯಿ ಮೆಮೋರಿಯಲ್ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ನೇಹಾ ಎಲ್.ಆರ್ ಇತ್ತೀಚೆಗೆ ಜರುಗಿದ ‘ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ– 2021’ದಲ್ಲಿ ಮಂಡಿಸಿದ್ದ ‘ಬಟ್ಟೆ ಬ್ಯಾಗ್ ಬಳಸೋಣ-ಪ್ಲಾಸ್ಟಿಕ್ ಚೀಲ ತ್ಯಜಿಸೋಣ’ ಎಂಬ ಸಂಶೋಧನಾ ಪ್ರಬಂಧವು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ಶಾಲೆಯ ವಿಜ್ಞಾನ ಶಿಕ್ಷಕಿ ಅಕ್ಷತಾ ಕುರ್ಡೇಕರ ಮಾರ್ಗದರ್ಶನ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.